ಕನ್ನಡ ಶುಭ ನುಡಿಗಳು – ನಾವು ಯಾರಿಂದ ಏನನ್ನು ಕಲಿಯಬೇಕು.?

Here is the list of ಕನ್ನಡ ಶುಭ ನುಡಿಗಳು

#1. ಕನ್ನಡ ಶುಭ ನುಡಿಗಳು 

  • ಉತ್ಸಾಹಿಯಾಗು ಆದರೆ ದುಡಕಬೇಡ.
  • ಕರುಣೆ ತೋರಿಸು ಆದರೆ ಮೋಸ ಹೋಗಬೇಡ.
  • ಶೂರನಾಗು ಆದರೆ ಕಟುಕನಾಗಬೇಡ.
  • ದಾನಿಯಾಗು ಆದರೆ ದರಿದ್ರನಾಗಬೇಡ.
  • ತ್ಯಾಗಿಯಾಗು ಆದರೆ ಅಡವಿಗೆ ಹೋಗಬೇಡ.
  • ಉಳಿತಾಯ ಮಾಡು ಆದರೆ ಜಿಪುಣನಾಗಬೇಡ.
  • ನಮ್ರತೆ ಇರಲಿ ಆದರೆ ಗುಲಾಮನಾಗಬೇಡ.
  • ಲಾಭಗಳಿಸು ಆದರೆ ಲೋಭಿಯಾಗಬೇಡ.
  • ಸೇವೆ ಮಾಡು ಆದರೆ ಸ್ವಾರ್ಥಿಯಾಗಬೇಡ.
  • ಭಾಗ್ಯವಂತನಾಗು ಆದರೆ ಬುದ್ಧಿಹೀನನಾಗಬೇಡ.

#2. ನಮ್ಮ ಆದರ್ಶ ಮಹಿಮರು ಯಾರು? ನಾವು ಯಾರಿಂದ ಏನನ್ನು ಕಲಿಯಬೇಕು.?

  • ಮಿತ್ರತ್ವವನ್ನು ಕೃಷ್ಣ ನಿಂದ.
  • ಮರ್ಯಾದೆಯನ್ನು ಶ್ರೀ ರಾಮನಿಂದ.
  • ಬ್ರಹ್ಮ ಚರ್ಯೆಯನ್ನು ಭೀಷ್ಮಚಾರ್ಯ ರಿಂದ.
  • ಗುರುಭಕ್ತಿಯನ್ನು ಏಕಲವ್ಯನಿಂದ.
  • ದಾನವನ್ನು ಕರ್ಣನಿಂದ.
  • ಧರ್ಮವನ್ನು ಯುಧಿಷ್ಟರನಿಂದ.
  • ಭಕ್ತಿಯನ್ನು ಪ್ರಹ್ಲಾದನಿಂದ.
  • ತಪಸ್ಸನ್ನು ದ್ರುವನಿಂದ.
  • ಮಾತ ಪಿತ್ರುಗಳ ಸೇವೆಯನ್ನು ಶ್ರವಣ ಕುಮಾರನಿಂದ.
  • ಸ್ವಾಮಿ ನಿಷ್ಟೆಯನ್ನು ಶ್ರೀ ಆಂಜನೇಯ ಸ್ವಾಮಿಯಿಂದ.
  • ತ್ಯಾಗವನ್ನು ದಧೀಚಿ ಮಹರ್ಷಿ ಯಿಂದ.
  • ಪ್ರೀತಿಯನ್ನು ತಾಯಿಯಿಂದ.
  • ಆದರ್ಶವನ್ನು ತಂದೆಯಿಂದ ಕಲಿಯಬೇಕು.

#3. ಸಾರ್ಥಕ ಮನುಷ್ಯನ ಒಂಬತ್ತು ಲಕ್ಷಣಗಳು

  • ಆಸೆ- ಕೋಪ- ನಾಲಿಗೆ ಈ ಮೂರನ್ನು ಹತೋಟಿಯಲ್ಲಿಡು.
  • ವ್ಯಾಪಾರ- ಪ್ರಯಾಣ- ಮದುವೆ ಈ ಮೂರಕ್ಕೆ ಆತುರ ಬೇಡ.
  • ಬುದ್ಧಿ ಶಕ್ತಿ – ಸಾಮರ್ಥ್ಯ-ಸಂತೋಷ ಈ ಮೂರಕ್ಕೆ ಬೆಲೆ ಕೊಡು.
  • ಹಣ- ಸಮಯ- ಶಕ್ತಿ ಈ ಮೂರನ್ನು ವ್ಯರ್ಥ ಮಾಡಬೇಡ.
  • ಧರ್ಮ- ನ್ಯಾಯ- ವಿನಯ ಈ ಮೂರಕ್ಕೆ ಗೌರವ ಕೊಡು.
  • ದೇಶ- ರಾಷ್ರ ದ್ವಜ -ಗೌರವ ಈ ಮೂರಕ್ಕೆ ಹೋರಾಡು.
  • ಧೈರ್ಯ-ವಾತ್ಸಲ್ಯ-ಶಿಷ್ಟಚಾರ ಈ ಮೂರನ್ನು ಪ್ರೀತಿಸು.
  • ಅನ್ಯಾಯ- ಅಹಂಕಾರ- ಸ್ವಾಮಿ ದ್ರೋಹ ಈ ಮೂರನ್ನು ದ್ವೇಷಿಸು.
  • ಸಾವು-ದುಃಖ-ಸೋಲು ಈ ಮೂರಕ್ಕೆ ಸದಾ ಸಿದ್ದ ನಾಗಿರು.

ಶುಭ ನುಡಿಗಳು

Read More Kannada Quotes here